![UDUPi:ಮದುವೆ ಗಾಡಿಯಂತೆ ಸಿಂಗರಿಸಿದ ಇನೋವಾ ವಾಹನದಲ್ಲಿ ಅಕ್ರಮ ಗೋ ಸಾಗಾಟ-ಪೊಲೀಸ್ ಮತ್ತು ಹಿಂದೂ ಕಾರ್ಯಕರ್ತರ ಕಣ್ಣು ತಪ್ಪಿಸಲು ಗೋಕಳ್ಳರ ಹೊಸ ತಂತ್ರ UDUPi:ಮದುವೆ ಗಾಡಿಯಂತೆ ಸಿಂಗರಿಸಿದ ಇನೋವಾ ವಾಹನದಲ್ಲಿ ಅಕ್ರಮ ಗೋ ಸಾಗಾಟ-ಪೊಲೀಸ್ ಮತ್ತು ಹಿಂದೂ ಕಾರ್ಯಕರ್ತರ ಕಣ್ಣು ತಪ್ಪಿಸಲು ಗೋಕಳ್ಳರ ಹೊಸ ತಂತ್ರ](https://blogger.googleusercontent.com/img/b/R29vZ2xl/AVvXsEhRPQOASd9g9G40PxT91WyVstJ6whvzZm3j4szK_x45YM3bF5szmCdYpceP6uSJLrKnPzDaK8UkZulV6haFHDhwBuCgoBZcHE9Ilr3i1mb_qLC04d6mKN4KJdg37tBrno9FUo08_TvsY-Q/s1600/1641990370769289-0.png)
UDUPi:ಮದುವೆ ಗಾಡಿಯಂತೆ ಸಿಂಗರಿಸಿದ ಇನೋವಾ ವಾಹನದಲ್ಲಿ ಅಕ್ರಮ ಗೋ ಸಾಗಾಟ-ಪೊಲೀಸ್ ಮತ್ತು ಹಿಂದೂ ಕಾರ್ಯಕರ್ತರ ಕಣ್ಣು ತಪ್ಪಿಸಲು ಗೋಕಳ್ಳರ ಹೊಸ ತಂತ್ರ
Wednesday, January 12, 2022
ಶಿರ್ವ: ಉಡುಪಿ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಗೋ ಕಳ್ಳರ ಹಾವಳಿ ಮುಂದುವರೆದಿದ್ದು, ಜಿಲ್ಲೆಯ ಶಿರ್ವದಲ್ಲಿ ಇಂದು ಕಳ್ಳರ ವಿನೂತನ ರೀತಿಯ ಕೈಚಳಕ ಬಯಲಾಗಿದೆ.
ಪೊಲೀಸ್ ಮತ್ತು ಹಿಂದೂ ಕಾರ್ಯಕರ್ತರ ಕಣ್ಣು ತಪ್ಪಿಸಲು ಹೊಸ ತಂತ್ರ ರಚಿಸಿದ ಕಳ್ಳರು ಮದುವೆ ಗಾಡಿಯಂತೆ ಸಿಂಗರಿಸಿದ ಇನ್ನೋವಾ ಕಾರಿನ ಮತ್ತು ಪಿಕಪ್ ವಾಹನದಲ್ಲಿ ದನ ಸಾಗಾಟ ಮಾಡುತ್ತಿದ್ದುದು ಬಯಲಾಗಿದೆ. ವಾಹನಗಳಲ್ಲಿ 16 ದನಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ರೀತಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದಾಗ ಹಿಂದೂ ಜಾಗರಣ ವೇದಿಕೆ ಮತ್ತು ಭಜರಂಗದಳ ಕಾರ್ಯಕರ್ತರು ಜಂಟಿ ಕಾರ್ಯಾಚರಣೆ ಮಾಡಿ ದನಗಳನ್ನು ರಕ್ಷಿಸಿದ್ದಾರೆ.
ಜಿಲ್ಲೆಯಲ್ಲಿ ಎಗ್ಗಿಲ್ಲದೆ ದನ ಕಳ್ಳರ ಹಾವಳಿ ಮುಂದುವರಿದಿದ್ದು ಮೊನ್ನೆಯಷ್ಟೆ ಕಾರ್ಕಳದಲ್ಲಿ ಕೊಟ್ಟಿಗೆಗೆ ನುಗ್ಗಿ ದನ ಕಳ್ಳತನ ಮಾಡಿದ್ದರು. ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.