![ಮಂಗಳೂರು: ಶಾರೀಕ್ ಆರೋಗ್ಯ ಸುಧಾರಿಸಿಲ್ಲ ಇನ್ನೂ ವಿಚಾರಣೆ ಆರಂಭವಾಗಿಲ್ಲ ಮಂಗಳೂರು: ಶಾರೀಕ್ ಆರೋಗ್ಯ ಸುಧಾರಿಸಿಲ್ಲ ಇನ್ನೂ ವಿಚಾರಣೆ ಆರಂಭವಾಗಿಲ್ಲ](https://blogger.googleusercontent.com/img/b/R29vZ2xl/AVvXsEhFZX80ELKfFpPMhFSOeYez48xKsekZ9sP0ucVkuAHGU2Ri85vpk6H8cMRRuCsKI3UTkEfZ9KtNJW1iXUkUOZ8g6-YgPdA2GgnrrN1_yTpJCkFJ9w_gBtiZ5BUAgTEtGIw25C3qNL7eYYs/s1600/1669449402123877-0.png)
ಮಂಗಳೂರು: ಶಾರೀಕ್ ಆರೋಗ್ಯ ಸುಧಾರಿಸಿಲ್ಲ ಇನ್ನೂ ವಿಚಾರಣೆ ಆರಂಭವಾಗಿಲ್ಲ
Friday, November 25, 2022
ಮಂಗಳೂರು: ಶಾರೀಕ್ ಆರೋಗ್ಯ ಸುಧಾರಿಸಿಲ್ಲ. ಚಿಕಿತ್ಸೆ ನಡೆಯುತ್ತಿದ್ದು, ಇನ್ನೂ ಆತನ ವಿಚಾರಣೆ ಮಾಡಿಲ್ಲ, ಹೇಳಿಕೆಯನ್ನೂ ಪಡೆದಿಲ್ಲ. ಶಾರೀಕ್ ನನ್ನು ಮಾತನಾಡಲು ನಮಗೆ ಅವಕಾಶವನ್ನು ವೈದ್ಯರು ಇನ್ನೂ ನೀಡಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದರು.
ನಗರದ ಗರೋಡಿ ಬಳಿ ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಶಂಕಿತ ಭಯೋತ್ಪಾದಕ ಶಾರೀಕ್ ಚಿಕಿತ್ಸೆ ಪಡೆಯುತ್ತಿರುವ ಕಂಕನಾಡಿ ಖಾಸಗಿ ಆಸ್ಪತ್ರೆಗೆ ಭೇಟಿಯಾದ ಅವರು, ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹಗಳ ಸುದ್ದಿ ಹರಿದಾಡುತ್ತಿದೆ. ಬೆಂಕಿ ಸುಟ್ಟ ಗಾಯ ಆಗಿದ್ದರಿಂದ ಸೋಂಕು ಬೇಗ ಹರಡುತ್ತದೆ. ವೈದ್ಯರ ಅಭಿಪ್ರಾಯದ ಪ್ರಕಾರ ಯಾರಿಗೂ ಶಾರೀಕ್ ಭೇಟಿಗೆ ಅವಕಾಶ ಕಲ್ಪಿಸಿಲ್ಲ. ವೈದ್ಯ ಸಿಬ್ಬಂದಿ ಸಂಪೂರ್ಣ ಸ್ಯಾನಿಟೈಸ್ ಆಗಿ ಶಾರೀಕ್ ಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹಿರಿಯ ಅಧಿಕಾರಿಗಳಿಗೂ ಶಾರೀಕ್ ಭೇಟಿಗೆ ಅವಕಾಶ ನೀಡಿಲ್ಲ ಎಂದರು.
ಶಾರೀಕ್ ಮಾತನಾಡಲು ಸಂಪೂರ್ಣ ಶಕ್ತನಾದಾಗ ಆತನ ಹೇಳಿಕೆ ಪಡೆಯುತ್ತೇವೆ. ಆತ ಇರುವ ಕೊಠಡಿಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಯಾವುದೇ ಆಚಾತುರ್ಯ ನಡೆಯದಂತೆ ಸಂಪೂರ್ಣ ಭದ್ರತೆ ನೀಡಿದ್ದೇವೆ. ಮೂರು ಶಿಫ್ಟ್ ಗಳಲ್ಲಿ ಪೊಲೀಸ್ ಸಿಬ್ಬಂದಿ ಭದ್ರತೆ ನೀಡುತ್ತಿದ್ದಾರೆ. ಪುರುಷೋತ್ತಮ್ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಎನ್ ಶಶಿಕುಮಾರ್ ಹೇಳಿದರು.