![ಚೈತ್ರಾ ಕುಂದಾಪುರ ಕೋಟಿ ಕೋಟಿ ವಂಚನೆ ಪ್ರಕರಣ- ಗುರುಪುರ ಸ್ವಾಮೀಜಿಗೆ ಸಿಸಿಬಿ ನೋಟೀಸ್ ಚೈತ್ರಾ ಕುಂದಾಪುರ ಕೋಟಿ ಕೋಟಿ ವಂಚನೆ ಪ್ರಕರಣ- ಗುರುಪುರ ಸ್ವಾಮೀಜಿಗೆ ಸಿಸಿಬಿ ನೋಟೀಸ್](https://blogger.googleusercontent.com/img/b/R29vZ2xl/AVvXsEiEVdIgEEnc6HCUv5YLPjIn0wxdO8BVNBr1imdLTaS_d09yaQsJL5q66ZPHGGFftYtWX-gVgmbQU3HRItcktDQiYUN-QZOL9ku1LoawLd0TYq5VobX6JRFJEhBM4su455wIlod-nD9HyVU/s1600/1696955625001525-0.png)
ಚೈತ್ರಾ ಕುಂದಾಪುರ ಕೋಟಿ ಕೋಟಿ ವಂಚನೆ ಪ್ರಕರಣ- ಗುರುಪುರ ಸ್ವಾಮೀಜಿಗೆ ಸಿಸಿಬಿ ನೋಟೀಸ್
Tuesday, October 10, 2023
ಮಂಗಳೂರು: ಚೈತ್ರಾ ಕುಂದಾಪುರ ಕೋಟಿ ಕೋಟಿ ರೂ ವಂಚನೆ ಮಾಡಿದ ಪ್ರಕರಣದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರಿಗೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಸಿಸಿಬಿ ಪೊಲೀಸರು ನೋಟೀಸ್ ನೀಡಿದ್ದಾರೆ.
ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಕಳುಹಿಸಿದ ನೋಟೀಸ್ ತಲುಪಿದೆ. ಇನ್ನೆರಡು ದಿನಗಳೊಳಗೆ ವಕೀಲರ ಜೊತೆಗೆ ಬೆಂಗಳೂರು ಸಿಸಿಬಿ ಕಚೇರಿಗೆ ತೆರಳಿ ವಿಚಾರಣೆಗೆ ತೆರಳುವುದಾಗಿ ಅವರು ತಿಳಿಸಿದ್ದಾರೆ.
ಚೈತ್ರ ಕುಂದಾಪುರ ವಂಚನೆ ಪ್ರಕರಣದಲ್ಲಿ ಗುರುಪುರ ಸ್ವಾಮೀಜಿ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಹಿಂದೆಯೆ ಸ್ವಾಮೀಜಿ ಈ ಪ್ರಕರಣದಲ್ಲಿ ತಾನು ಇಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದರು.