Mangalore:ಮಂಗಳೂರಿನಿಂದ ನಾಪತ್ತೆಯಾಗಿದ್ದ ದಿವ್ಯಾ ಎಂಬ ಮಹಿಳೆಯ ಪ್ರಕರಣ ಸುಖಾಂತ್ಯ

Mangalore:ಮಂಗಳೂರಿನಿಂದ ನಾಪತ್ತೆಯಾಗಿದ್ದ ದಿವ್ಯಾ ಎಂಬ ಮಹಿಳೆಯ ಪ್ರಕರಣ ಸುಖಾಂತ್ಯ

ಬ್ಯಾಂಕಿಗೆ ಹೋಗಿ ಬರುತ್ತೇನೆ ಎಂದು ಮಂಗಳೂರಿನಿಂದ ನಾಪತ್ತೆಯಾಗಿದ್ದ ಸುಳ್ಯ ಮೂಲದ ವಿವಾಹಿತ ಮಹಿಳೆ ದಿವ್ಯಾ(29) ಅವರನ್ನು ‌ಮಂಗಳೂರು ಪೋಲಿಸರು ಪತ್ತೆ ಹಚ್ಚಿದ್ದಾರೆ.

ಸುಳ್ಯದ ಬೆಳ್ಳಾರೆಯ ಕಲ್ಮಡ್ಕದ ಮನೆಯಿಂದ ನಿನ್ನೆ ಬೆಳಿಗ್ಗೆ ತನ್ನ ಅಕ್ಕ ಚೈತ್ರಾ ಅವರೊಂದಿಗೆ ಮಂಗಳೂರಿಗೆ ಬಂದಿದ್ದ ದಿವ್ಯಾ, ಉರ್ವ ಸ್ಟೋರ್ ನ ಯೂನಿಯನ್ ಬ್ಯಾಂಕಿಗೆ ಹೋಗಿ ಬರುತ್ತೇನೆ ಎಂದು ತಿಳಿಸಿ ಬಳಿಕ ಬಾರದೆ, ಫೋನ್ ಸ್ವಿಚ್ ಆಪ್ ಮಾಡಿ ನಾಪತ್ತೆಯಾಗಿದ್ದರು.

ದಿವ್ಯಾಳ ಮೊಬೈಲ್ ಸ್ವಿಚ್ ಆಫ್ ಆಗಿದೆ, ಆಕೆಯನ್ನು ಎಲ್ಲಾದರೂ ಕಂಡರೆ ಮಾಹಿತಿ ನೀಡುವಂತೆ ಕೋರಿ ಮಹಿಳೆಯ ಪತಿ ಸತೀಶ್ ಸೋಷಿಯಲ್ ಮೀಡಿಯಾದಲ್ಲಿ ತನ್ನ ಮೊಬೈಲ್ ನಂಬರ್ ಸಹಿತ ಸಂದೇಶ ರವಾನಿಸಿ ಪತ್ತೆ ಹಚ್ಚಲು ಸಹಕರಿಸಲು ಮನವಿ ಮಾಡಿದ್ದರು.

 ನಂತರ ದಿವ್ಯಾ ಅವರ ಅಕ್ಕ ಚೈತ್ರಾ ಉರ್ವ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ನಾಪತ್ತೆ ಪ್ರಕರಣ ದಾಖಲಿಸಿದ್ದರು.ಮಹಿಳೆಯ ಪತ್ತೆಗಿಳಿದ 
ಉರ್ವ ಪೊಲೀಸರು ದಿವ್ಯಾ ಅವರನ್ನು‌ ಮೈಸೂರಿನಲ್ಲಿ ಪತ್ತೆಹಚ್ಚಿ, ಮೈಸೂರಿನಿಂದ ಅವರನ್ನು ಮಂಗಳೂರಿಗೆ ಕರೆತರಲಾಗಿದ್ದು, ಅವರ ಪೋಷಕರ ಜೊತೆ ಕಳುಹಿಸಿಕೊಟ್ಟಿದ್ದಾರೆ.

Ads on article

Advertise in articles 1

advertising articles 2

Advertise under the article