Mangalore:ಮಂಗಳೂರು ವಿನಿ ವಿಧಾನಸೌಧದ ಲಂಚಾವತಾರ ಬಯಲಿಗೆ:ಮಂಗಳೂರು ತಹಶೀಲ್ದಾರ್ ಪುರಂದರ ಹೆಗ್ಡೆ ಲೋಕಾಯುಕ್ತ ಬಲೆಗೆ

Mangalore:ಮಂಗಳೂರು ವಿನಿ ವಿಧಾನಸೌಧದ ಲಂಚಾವತಾರ ಬಯಲಿಗೆ:ಮಂಗಳೂರು ತಹಶೀಲ್ದಾರ್ ಪುರಂದರ ಹೆಗ್ಡೆ ಲೋಕಾಯುಕ್ತ ಬಲೆಗೆ

ಮಂಗಳೂರು: ಮಂಗಳೂರು ಮಿನಿ ವಿಧಾನಸೌಧದ ಲಂಚಾವತಾರವನ್ನು,ಮಂಗಳೂರು ತಹಶೀಲ್ದಾರ್ ಹಾಗೂ ಸಹಾಯಕನನ್ನು ಬಂಧಿಸುವ ಮೂಲಕ ಮಂಗಳೂರು ಲೋಕಾಯುಕ್ತ ಬಯಲಿಗೆಳೆದಿದೆ.

ಜಾಗ ಮಾರಾಟಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವರಿಗೆ NOC ನೀಡಲು ತಹಶೀಲ್ದಾರ್ ಅಸಿಸ್ಟೆಂಟ್ ಆಫೀಸರ್ ಶಿವಾನಂದ ನಾಟೇಕರ್ ಹಣಕ್ಕೆ ಬೇಡಿಕೆ ಇಟ್ಟಿದ್ದ. ಈತ ಅವರಿಂದ 4,700 ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರು ಮಂಗಳೂರು ತಾಲೂಕು ಕಚೇರಿಗೆ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ತಹಶೀಲ್ದಾರ್ ಪುರಂದ‌ ಹೆಗ್ಡೆಗಾಗಿ ತಾನು ಲಂಚ ಪಡೆದಿದ್ದಾಗಿ ಶಿವಾನಂದ ನಾಟೇಕರ್ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಪುರಂದರ್ ಹೆಗ್ಡೆಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ಲೋಕಾಯುಕ್ತ ಎಸ್ಪಿ ಲಕ್ಷ್ಮಿಗಣೇಶ್ ಹಾಗೂ ಡಿವೈಎಸ್ಪಿ ಚೆಲುವರಾಜ್ ನೇತೃತ್ವದಲ್ಲಿ ದಾಳಿ ನಡೆದಿದೆ.

Ads on article

Advertise in articles 1

advertising articles 2

Advertise under the article