Mangalore: ಇಂದಿನಿಂದ ಕಟೀಲು ಮೇಳದ ಕಾಲಮಿತಿ ಯಕ್ಷಗಾನ ಸೇವೆ ಆರಂಭ

Mangalore: ಇಂದಿನಿಂದ ಕಟೀಲು ಮೇಳದ ಕಾಲಮಿತಿ ಯಕ್ಷಗಾನ ಸೇವೆ ಆರಂಭ

ಮಂಗಳೂರು: ರಾತ್ರಿ ಪೂರ್ತಿ ಯಕ್ಷಗಾನ ಸೇವೆ ನಡೆಸುತ್ತಿದ್ದ ಹರಕೆ ಬಯಲಾಟ ಮೇಳ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ‌ಮಂಡಳಿ ಈ ಬಾರಿಯಿಂದ ಕಾಲಮಿತಿಗಿಳಿದಿದೆ. ಇಂದಿನಿಂದ ಆರೂ ಮೇಳಗಳು ಕಾಲಮಿತಿಯ ಯಕ್ಷಗಾನ ಸೇವೆ ನಡೆಸುತ್ತಿದೆ.

ಹಿಂದೆ ರಾತ್ರಿ 8.30ಕ್ಕೆ ಆಗುತ್ತಿದ್ದ ಚೌಕಿ ಪೂಜೆ ಇನ್ನುಮುಂದೆ ಸಂಜೆ 5.45ಕ್ಕೆ ನಡೆಯಲಿದೆ. ಪೂರ್ವರಂಗ ಪ್ರವೇಶ ಹಿಂದೆ ರಾತ್ರಿ 8.45ಕ್ಕೆ ಆಗುತ್ತಿತ್ತು ಇನ್ನುಮುಂದೆ ಸಂಜೆ 6ಕ್ಕೆ ನಡೆಯಲಿದೆ. 6-7 ರವರೆಗೆ ಪೂರ್ವರಂಗ ಪ್ರವೇಶ ನಡೆದು 7ಗಂಟೆಗೆ ಪ್ರಸಂಗ ಆರಂಭವಾಗಲಿದೆ. ಹಿಂದೆ ರಾತ್ರಿ 10.30 ರಿಂದ ಬೆಳಗ್ಗೆ 6ರವರೆಗೆ ಯಕ್ಷಗಾನ ಸೇವೆ ನಡೆಯುತ್ತಿತ್ತು. ಈ ಬಾರಿಯಿಂದ ಕಾಲಮಿತಿಯ ಅನ್ವಯ 7ರಿಂದ 12.30ರವರೆಗೆ ಯಕ್ಷಗಾನ ನಡೆಯಲಿದೆ.
ಕಾಲಮಿತಿಗೆ ಪ್ರಸಂಗವನ್ನು ಹೊಂದಾಣಿಸಬೇಕಾದ ಅನಿವಾರ್ಯತೆಯಿಂದ ಪೂರ್ವರಂಗದಲ್ಲಿ ಪೀಠಿಕಾ ಸ್ತ್ರೀವೇಷವನ್ನು ಕೈಬಿಡಲಾಗಿದೆ. ಅಲ್ಲದೆ ಕಟೀಲು ಮೇಳದಲ್ಲಿ ಅತೀ ಹೆಚ್ಚು ಪ್ರದರ್ಶನಗೊಳ್ಳುವ ಶ್ರೀ ದೇವಿ ಮಹಾತ್ಮೆ ಯಕ್ಷಗಾನದಲ್ಲಿ ಕೆಲವೊಂದು ಸನ್ನಿವೇಶವನ್ನು ಪ್ರಸಂಗಕ್ಕೆ ತೊಂದರೆಯಾಗದಂತೆ ಕೈಬಿಡಲಾಗಿದೆ.

Ads on article

Advertise in articles 1

advertising articles 2

Advertise under the article