![Mangalore;ಲಾಡ್ಜ್ ನಲ್ಲಿ ತಂಗಿದ್ದ ವ್ಯಕ್ತಿಯ ಮೃತದೇಹ ನಗ್ನ ರೀತಿಯಲ್ಲಿ ಪತ್ತೆ Mangalore;ಲಾಡ್ಜ್ ನಲ್ಲಿ ತಂಗಿದ್ದ ವ್ಯಕ್ತಿಯ ಮೃತದೇಹ ನಗ್ನ ರೀತಿಯಲ್ಲಿ ಪತ್ತೆ](https://blogger.googleusercontent.com/img/b/R29vZ2xl/AVvXsEiDvV2N0c6mo0dTCI0MTb2LdJtxDTnHDibdRzS2eUzgIFz3qgCDkE153kiFPaZmhIJ7mVGMvEcU3RtFQt8sl1hfZ4Wez-Kb5qWG-4fDr3P6kTZ5trO_4mWRvGbTgadR5fbrNaWxluyrhRw/s1600/1670928457143481-0.png)
Mangalore;ಲಾಡ್ಜ್ ನಲ್ಲಿ ತಂಗಿದ್ದ ವ್ಯಕ್ತಿಯ ಮೃತದೇಹ ನಗ್ನ ರೀತಿಯಲ್ಲಿ ಪತ್ತೆ
Tuesday, December 13, 2022
ಮಂಗಳೂರು:ನಗರದ ಪಂಫೈಲ್ ವೃತ್ತದ ಬಳಿಯಿರುವ ಪದ್ಮಶ್ರೀ ಲಾಡ್ಜ್ ನಲ್ಲಿ ಮಧ್ಯವಯಸ್ಕ ವ್ಯಕ್ತಿಯ ಮೃತದೇಹ ಸಂಶಯಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಗ್ನ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದ್ದರಿಂದ ಸಂಶಯ ವ್ಯಕ್ತವಾಗಿದೆ.
ಲಾಡ್ಜ್ ನಲ್ಲಿ ಶವ ಪತ್ತೆಯಾಗಿದ್ದು ಅಲ್ಲಿ ಸಿಕ್ಕಿರುವ ಡ್ರೈವಿಂಗ್ ಲೈಸನ್ಸ್ ನಲ್ಲಿರು ಮಾಹಿತಿ ಪ್ರಕಾರ ಮೃತ ವ್ಯಕ್ತಿ ಕಾಸರಗೋಡು ಜಿಲ್ಲೆಯ ಪೈವಳಿಕೆ ನಿವಾಸಿ ಅಬ್ದುಲ್ ಕರೀಂ ಎಂದು ಗುರುತಿಸಲಾಗಿದೆ. ಡಿಎಲ್ ಪ್ರಕಾರ, ವ್ಯಕ್ತಿಯ ವಯಸ್ಸು 56 ಆಗಿರುತ್ತದೆ. ಇವರು ಉಳಿದುಕೊಂಡಿದ್ದ ಲಾಡ್ಜ್ ಗೆ ಯಾರೋ ಬುರ್ಖಾ ಧರಿಸಿದ ಮಹಿಳೆ ಬಂದಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಅಲ್ಲದೆ, ಕೊಠಡಿಯ ಒಳಗೆ ಕೆಲವು ಆಯುರ್ವೇದಿಕ್ ಮಾತ್ರೆ ಕೂಡ ಪತ್ತೆಯಾಗಿದೆ. ಮಹಿಳೆಯ ಜೊತೆಗೆ ಲೈಂಗಿಕ ಸಂಪರ್ಕದ ಬಳಿಕ ಹೃದಯಾಘಾತ ಆಗಿದೆಯೇ, ಸಾವಿಗೆ ಬೇರೆ ಏನಾದ್ರೂ ಕಾರಣ ಇದೆಯೇ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿದ್ದಾರೆ.