![ಸುರತ್ಕಲ್: ಕೃಷ್ಣಾಪುರದಲ್ಲಿ ದುಷ್ಕರ್ಮಿಗಳಿಂದ ಚೂರಿ ಇರಿತ ವ್ಯಕ್ತಿ ಗಂಭೀರ ಸುರತ್ಕಲ್: ಕೃಷ್ಣಾಪುರದಲ್ಲಿ ದುಷ್ಕರ್ಮಿಗಳಿಂದ ಚೂರಿ ಇರಿತ ವ್ಯಕ್ತಿ ಗಂಭೀರ](https://blogger.googleusercontent.com/img/b/R29vZ2xl/AVvXsEjJ7T7p2599-y90t4A6jhdzMpPcTfX7AWlv_BKzrRALupa6RqzkwcKfQ2Xn1G_QW64-mcvQRQDdhSKYnOePuwMal4akIY_f8ryd7OJLmAUtlMFDm9nNxKiTXF66Y6ZIKl00Dx5bJAEU2cY/s1600/1671898162202448-0.png)
ಸುರತ್ಕಲ್: ಕೃಷ್ಣಾಪುರದಲ್ಲಿ ದುಷ್ಕರ್ಮಿಗಳಿಂದ ಚೂರಿ ಇರಿತ ವ್ಯಕ್ತಿ ಗಂಭೀರ
Saturday, December 24, 2022
ಸುರತ್ಕಲ್: ದುಷ್ಕರ್ಮಿಗಳಿಬ್ಬರು ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಪರಾರಿಯಾಗಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರದ ನೈತಂಗಡಿ ಎಂಬಲ್ಲಿ ನಡೆದಿದೆ.
ಕೃಷ್ಣಾಪುರ ನಿವಾಸಿ ಜಲೀಲ್ ಇರಿತಕ್ಕೊಳಗಾದ ವ್ಯಕ್ತಿ.
ಕೃಷ್ಣಾಪುರ 4 ನೇ ಬ್ಲಾಕ್ ನ ನೈತಂಗಡಿಯಲ್ಲಿ ಜಲೀಲ್ ಅವರು ದಿನಸಿ ಅಂಗಡಿ ಹೊಂದಿದ್ದರು. ಅವರು ಅಂಗಡಿಯಲ್ಲಿದ್ದ ವೇಳೆ ಎದೆಯ ಭಾಗಕ್ಕೆ ಚೂರಿಯಿಂದ ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿದ್ದು, ಜಲೀಲ್ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.