ತುಮಕೂರು :ಜ್ಯೋತಿಷಿ ಮಾತು ಕೇಳಿ ತಾಯಿಯನ್ನೇ ಕೊಲೆಗೈದ ಮಗಳು..!!

ತುಮಕೂರು :ಜ್ಯೋತಿಷಿ ಮಾತು ಕೇಳಿ ತಾಯಿಯನ್ನೇ ಕೊಲೆಗೈದ ಮಗಳು..!!

ತುಮಕೂರು: ಹೆತ್ತ ತಾಯಿಯನ್ನೇ ಕೊಲೆಗೈದು ಹೃದಯಾಘಾತದಿಂದ ಸಾವು ಎಂದು ಕಥೆ ಕಟ್ಟಿ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ದ ಮಗಳು ಕೊನೆಗೂ ಸಿಕ್ಕಿ ಬಿದ್ದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರಿನ ಬಂಡೇಪಾಳ್ಯ ಬಳಿಯ ಶ್ರೀನಗರ ನಿವಾಸಿ ಪುಷ್ಪಲತಾ ಕೊಲೆಯಾದ ಮಹಿಳೆ. ಸ್ವಂತ ಮನೆ ಕಟ್ಟಿಕೊಂಡು ಮಗಳು ಸುಚಿತ್ರಾ ಹಾಗೂ ಆಳಿಯನ ಜೊತೆ ವಾಸವಿದ್ದರು. ಕಳೆದ ಕೆಲ ದಿನಗಳಿಂದ ಮಂಡಿನೋವು ಎಂದು ಹಾಸಿಗೆ ಹಿಡಿದಿದ್ದರು.

ಫೆಬ್ರವರಿ 11 ರಂದು ರಾತ್ರಿ ನಿಗೂಢವಾಗಿ ಪುಷ್ಪಲತಾ ಸಾವನಪ್ಪಿದ್ದರು. ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದಳು. ಈ ವೇಳೆ ಸ್ಥಳೀಯರಿಗೆ ಮಗಳ ವರ್ತನೆ ಅನುಮಾನ ತಂದಿತ್ತು. ಹಾಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ನಡೆಸಿದ್ದಾರೆ.

ಸುಚಿತ್ರಾ ಹಾಗೂ ಆಕೆಯ ಪತಿ ಸುರೇಶ್ ಪುಷ್ಪಲತಾ ಮನೆಯಲ್ಲಿಯೇ ವಾಸವಿದ್ದರು. ಸುರೇಶ ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡುತಿದ್ದ. ಒಂದು ವರ್ಷದ ಹಿಂದೆ ಸುಚಿತ್ರ ತಂದೆ ಬಾಬು ನಾಯಕ್ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದರು. ತಂದೆಯನ್ನು ಕಳೆದುಕೊಂಡಿದ್ದ ದುಃಖದಲ್ಲಿದ್ದ ಸುಚಿತ್ರಾ ಜ್ಯೋತಿಷಿಯೊಬ್ಬರ ಭೇಟಿ ಮಾಡಿದ್ದಳು. ಈ ವೇಳೆ ಬಾಬು ಸಾವಿಗೆ ಆತನ ಪತ್ನಿಯೇ ಕಾರಣ. ಪುಷ್ಪಲತಾ ಮಾಟಮಂತ್ರ ಮಾಡಿಸಿದ್ದರು. ನಿನಗೂ ಅವರಿಂದ ಕಂಠಕ ಇದೆ ಎಂದು ಜ್ಯೋತಿಷಿ ಹೇಳಿದ್ದರಂತೆ.

ತಾಅಯಿಯೇ ತನ್ನ ತಂದೆ ಕೊಂದಿದ್ದಾಳೆ. ತನಗೂ ಆಕೆಯಿಂದ ಕಂಠಕವಿದೆ ಎಂಬುದನ್ನೇ ತಲೆಯಲ್ಲಿಟ್ಟುಕೊಂಡಿದ್ದ ಸುಚಿತ್ರಾ, ಫೆಬ್ರವರಿ 11ರ ರಾತ್ರಿ ಊಟ ಮಾಡಿ ಮಲಗಿದ್ದ ತಾಯಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿದ್ದಾಳೆ. ಹಲ್ಲೆಯಿಂದ ಮುಖದಲ್ಲಿ ರಕ್ತದಕಲೆಗಳು ಕಂಡುಬಂದಿದ್ದವು. ವಿಷಯ ಗೊತ್ತಿದ್ದರೂ ಸುಚಿತ್ರಾ ಗಂಡ ಮೌನವಾಗಿದ್ದ.

ಇದೀಗ ಪೊಲೀಸರ ತನಿಖೆ ವೇಳೆ ಸುಚಿತ್ರಾ ಪತಿ ಸುರೇಶ್ ಕೂಡ ಶಾಮೀಲಾಗಿರುವುದು ಬಯಲಾಗಿದೆ. ಸದ್ಯ ಸುಚಿತ್ರಾ ಹಾಗೂ ಆಕೆಯ ಪತಿ ಸುರೇಶ್ ಅನ್ನು ಕ್ಯಾತಸಂದ್ರ ಪೊಲೀಸರು ಬಂಧಿಸಿದ್ದಾರೆ.

Ads on article

Advertise in articles 1

advertising articles 2

Advertise under the article