ಮಂಡ್ಯ :ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಮನಸೋ ಇಚ್ಛೆ ಕಲ್ಲಿನಿಂದ ಮಾರಣಾಂತಿಕ ಹಲ್ಲೆ...!!!

ಮಂಡ್ಯ :ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಮನಸೋ ಇಚ್ಛೆ ಕಲ್ಲಿನಿಂದ ಮಾರಣಾಂತಿಕ ಹಲ್ಲೆ ಮಾಡಿರುವಂತಹ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದಲ್ಲಿ ನಡೆದಿದೆ.
ಹುಡುಗಿ ವಿಚಾರವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಕೈಮುಗಿದು ತಪ್ಪಾಯ್ತು ಎಂದರೂ ಬಿಡದೆ ಕಾಲಿನ ಮೇಲೆ ಸೈಜುಗಲ್ಲಿನಿಂದ ಭೀಕರವಾಗಿ ಹಲ್ಲೆ ಮಾಡಿದ ಕಿರಾತಕರು ವ್ಯಕ್ತಿಯ ಕಾಲು ಮುರಿದಿದ್ದಾರೆ. ಇನ್ನು ತಾವೆಸಗಿದ ಕ್ರೌರ್ಯವನ್ನು ವಿಡಿಯೋ ಕೂಡ ಮಾಡಿದ್ದಾರೆ.
ಫೆಬ್ರವರಿ 22ರಂದು ಮಧ್ಯಾಹ್ನ 03 ಗಂಟೆ ಸಮಯದಲ್ಲಿ ಚೇಕನಹಳ್ಳಿಯಲ್ಲಿರುವ ನನ್ನ ಚಿಕ್ಕಮ್ಮನ ಮಗ ನಂದೀಶನ ಬೈಕಿನಲ್ಲಿ ಚಿನಕುರಳಿಗೆ ಡ್ರಾಪ್ ತೆಗೆದುಕೊಳ್ಳುವ ಸಲುವಾಗಿ ಕನಗನಹಳ್ಳಿಯಿಂದ ಸ್ವಲ್ಪ ಮುಂದೆ ಕೆ.ಆರ್ ಪೇಟೆ – ಮೈಸೂರು ಮುಖ್ಯರಸ್ತೆಯಲ್ಲಿ ಚಿನಕುರಳಿ ಕಡೆಗಾದಂತೆ ನಾನು ಮತ್ತು ನವೀನ, ಬೈಕಿನಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಕಾರ್ ಮತ್ತು ಬೈಕಿನಲ್ಲಿ ಬಂದಂತಹ ನಮ್ಮ ಗ್ರಾಮದ ಗಿರೀಶ್, ಮಂಜು ಅಲಿಯಾಸ್ ಪ್ಲಗ್, ಜೀವನ್, ಶಶಿಕುಮಾರ, ಅಯ್ಯಪ್ಪ, ಮದನ್, ಡಿಂಕಾ ಗ್ರಾಮದ ಮಾದಪ್ಪ, ರವಿ ಮತ್ತು ನಿಂಗಣ್ಣ, ಗಣೇಶರವರು ಅಕ್ರಮ ಗುಂಪುಕಟ್ಟಿಕೊಂಡು ಕೈಯಲ್ಲಿ ದೊಣ್ಣೆ ಮತ್ತು ಕಲ್ಲನ್ನು ಹಿಡಿದುಕೊಂಡು ಬಂದು ನಮ್ಮನ್ನು ಅಡ್ಡ ಹಾಕಿದರು.
ನನ್ನನ್ನು ಹಿಡಿದುಕೊಂಡು ಮುಂದೆ ಹೋಗದಂತೆ ತಡೆದು ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ರವಿ ದೊಣ್ಣೆಯಿಂದ ನನ್ನ ತಲೆಯ ಹಿಂಭಾಗಕ್ಕೆ, ಮಾದಪ್ಪ ದೊಣ್ಣೆಯಿಂದ ನನ್ನ ಬಲಕಾಲಿಗೆ ಹೊಡೆದು ರಕ್ತಗಾಯ ಪಡಿಸಿದರು. ಸ್ವಲ್ಪ ಸಮಯದ ನಂತರ ಅಲ್ಲಿಗೆ ಬಂದ ಗಿರೀಶ, ದೊಣ್ಣೆಯನ್ನು ತೆಗೆದುಕೊಂಡು ಬಾಯಿಗೆ ತುರುಕಿದನು. ನಿಂಗಣ್ಣ ದೊಣ್ಣೆಯಿಂದ ಎಡಕಾಲಿಗೆ ಹೊಡೆದನು. ಅಷ್ಟರಲ್ಲಿ ಅಲ್ಲಿಯೇ ಇದ್ದ ಮೊರಸಹಳ್ಳಿ ಗ್ರಾಮದ ಕೆಲವರು ಅವರಿಂದ ನನ್ನನ್ನು ಬಿಡಿಸಿದರು. ಈ ಮೇಲ್ಕಂಡವರೆಲ್ಲರೂ ಈ ದಿನ ಬದುಕಿಕೊಂಡಿದ್ದೀಯಾ ಮಗನೇ ನೀವೂ ಪದೇ ಪದೇ ನಮ್ಮ ವಿಚಾರಕ್ಕೆ ಬರತ್ತಾ ಇದ್ದೀಯಾ ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆಯನ್ನು ಹಾಕಿ ಅವರು ಹಿಡಿದುಕೊಂಡು ಬಂದಿದ್ದ ಕಲ್ಲು ಮತ್ತು ದೊಣ್ಣೆಯನ್ನು ಅಲ್ಲಿಯೇ ಬಿಸಾಕಿ ಹೊರಟು ಹೋದರು.
ನನಗೆ ಮತ್ತು ನವೀನನಿಗೆ ಹೊಡೆದದ್ದನ್ನು ಕಣ್ಣಾರೆ ಕಂಡಂತಹ ನಮ್ಮ ಚಿಕ್ಕಮ್ಮನ ಮಗ ಚೀಕನಹಳ್ಳಿ ಗ್ರಾಮದ ನಂದೀಶ, ಅವನು ಗಾಬರಿಗೊಂಡು ಸ್ಥಳದಿಂದ ಹೊರಟುಹೋದ. ಆಗ ಅಲ್ಲಿಯೇ ಇದ್ದ ಸಾರ್ವಜನಿಕರು ನನ್ನನ್ನು ಮತ್ತು ನವೀನನನ್ನು ಆಂಬ್ಯುಲೆನ್ಸ್ನಲ್ಲಿ ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ.
ಪಾಂಡವಪುರ ಠಾಣೆಯಲ್ಲಿ 14 ಆರೋಪಿಗಳ ವಿರುದ್ಧ FIR ದಾಖಲಾಗಿದೆ.