ಬೆಂಗಳೂರು :SIR ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಮತ್ತಷ್ಟು ಕಾಲಾವಕಾಶ; ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ.

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅರ್ಜಿ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ನೀಡಲಾಗಿದ್ದ ಕಾಲಮಿತಿಯನ್ನು ಚುನಾವಣಾ ಆಯೋಗ ಆಗಸ್ಟ್ 17ರ ವರೆಗೆ ಮುಂದುವರಿಸಲು ಆದೇಶಿಸಿದೆ.
ಇತ್ತೀಚೆಗಷ್ಟೇ 18 ವರ್ಷ ಪೂರೈಸಿರುವ ಯುವಜನತೆ ಹೊಸದಾಗಿ ಮತದಾರರ ಚೀಟಿಗೆ ಅರ್ಜಿ ಸಲ್ಲಿಸಲು ಮತ್ತು ಹಳೆಯ ವೋಟರ್ ಐಡಿಯಲ್ಲಿರುವ ಮಾಹಿತಿಗಳನ್ನು (ಹೆಸರು, ವಿಳಾಸ ಇತ್ಯಾದಿ) ಸರಿಪಡಿಸಿಕೊಳ್ಳಲು ಬಯಸುವ ನಾಗರಿಕರು ಈ ವಿಸ್ತರಿತ ಸಮಯದ ಲಾಭ ಪಡೆಯಬಹುದಾಗಿದೆ.
ಸ್ವೀಕೃತವಾಗುವ ಎಲ್ಲಾ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ವಿಚಾರಣೆ ನಡೆಸಿ ಪ್ರಕಟಿಸಲಾಗುವ ಅಂತಿಮ ಮತದಾರರ ಪಟ್ಟಿಯ ಬಿಡುಗಡೆ ದಿನಾಂಕವನ್ನು ಸಹ ಪರಿಷ್ಕೃತ ವೇಳಾಪಟ್ಟಿಗನುಸಾರವಾಗಿ ಪುನರ್ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ
ಅರ್ಹರು ತಮ್ಮ ಭಾಗದ ಬೂತ್ ಮಟ್ಟದ ಅಧಿಕಾರಿಗಳ (BLO) ಮೂಲಕ ನೇರವಾಗಿ ಅಥವಾ ಚುನಾವಣಾ ಆಯೋಗದ ‘ವೋಟರ್ ಸರ್ವಿಸ್ ಪೋರ್ಟಲ್’ ತಾಲೂಕಿನ ಮೂಲಕ ಆನ್ಲೈನ್ನಲ್ಲೂ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.