Big News ಬಿಪಿಎಲ್​ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ; ಪೆಟ್ರೋಲ್​ ದರದಲ್ಲಿ ₹25 ಇಳಿಕೆ

Big News ಬಿಪಿಎಲ್​ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ; ಪೆಟ್ರೋಲ್​ ದರದಲ್ಲಿ ₹25 ಇಳಿಕೆ

ನವದೆಹಲಿ:ತೈಲ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜಾರ್ಖಂಡ್​ ರಾಜ್ಯದ ಬಡ ಜನರಿಗೆ ಅಲ್ಲಿನ ಸರ್ಕಾರ ಗುಡ್ ನ್ಯೂಸ್  ನೀಡಿದೆ. ಪ್ರತೀ ಲೀಟರ್​​ ಪೆಟ್ರೋಲ್ ದರದಲ್ಲಿ 25 ರೂಪಾಯಿ ಇಳಿಕೆ ಮಾಡಲಾಗುವುದು ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಘೋಷಸಿದ್ದಾರೆ.

ಆದರೆ ಇದು ಎಲ್ಲರಿಗೂ ಈ ದರದಲ್ಲಿ ಪೆಟ್ರೋಲ್ ಸಿಗುವುದಿಲ್ಲ, ಬಿಪಿಎಲ್ ಕಾರ್ಡ್  ಹೊಂದಿರುವ ಬಡ ದ್ವಿಚಕ್ರ ವಾಹನ ಸವಾರರಿಗೆ ಮಾತ್ರ ನೀಡಲಾಗುತ್ತದೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಹೇಮಂತ್ ಸೊರೇನ್ "ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು ಬಡವರು ಮತ್ತು ಮಧ್ಯಮ ವರ್ಗದವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಟೂ ವೀಲ್ಹರ್ ವಾಹನಗಳಿಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ ₹25 ರೂಪಾಯಿ ಇಳಿಕೆ ಮಾಡಲಾಗುತ್ತಿದ್ದು ಬರುವ (2022)ಜನವರಿ 26,  ರಿಂದ ಇದರ ಪ್ರಯೋಜನ ಪಡೆಯಬಹುದಾಗಿದೆ" ಎಂದು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article