Mangalore:ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಪ್ರೇರೇಪಿಸುವಂತೆ ದೇವರ ಮೊರೆ ಹೋದ ಜಿಲ್ಲೆಯ ಅತಿಥಿ ಉಪನ್ಯಾಸಕರು(Guest Lecture's)

Mangalore:ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಪ್ರೇರೇಪಿಸುವಂತೆ ದೇವರ ಮೊರೆ ಹೋದ ಜಿಲ್ಲೆಯ ಅತಿಥಿ ಉಪನ್ಯಾಸಕರು(Guest Lecture's)


ಮಂಗಳೂರು:ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವಾಭದ್ರತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ `ದೇವರ ಮೊರೆ' ಹೋದ ಘಟನೆ ನಡೆಯಿತು.

ದ.ಕ. ಜಿಲ್ಲೆಯ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ವತಿಯಿಂದ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಾರ್ಥನೆ ನಡೆಸಿ ಸರ್ಕಾರಕ್ಕೆ ಮನವರಿಕೆ ಆಗುವಂತೆ ಪ್ರೇರಿಪಿಸಲು  ದೇವರ ಮೊರೆಯಿಡುವ ಪ್ರಯತ್ನವನ್ನು ಅತಿಥಿ ಉಪನ್ಯಾಸಕರು ಮಾಡಿದರು. ಈ ಹಿನ್ನೆಲೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು, ಶ್ರೀ ಕೊರಗಜ್ಜ ಕ್ಷೇತ್ರ ಕುತ್ತಾರು, ಉಳ್ಳಾಲ ದರ್ಗಾ, ಉಳ್ಳಾಲದ ರಾಣಿ ಅಬ್ಬಕ್ಕ ಆರಾಧಿಸುತ್ತಿದ್ದ ಪಾರ್ಶ್ವನಾಥ ಸ್ವಾಮಿ ಬಸದಿ, ಮಂಗಳೂರಿನ ಧರ್ಮ ಪ್ರಾಂತ್ಯದ ಬಿಷಪ್ ನಿವಾಸದ ಚಾಪೆಲ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಬೇಡಿಕೆ ಈಡೇರಿದ್ದಲ್ಲಿ ಕುತ್ತಾರು ಶ್ರೀ ಕೊರಗಜ್ಜ ದೈವಕ್ಕೆ ಹರಕೆ ಕೋಲ ನೀಡುವ ಸಂಕಲ್ಪ ಮಾಡಲಾಯಿತು. ದರ್ಗಾದ ಅಧ್ಯಕ್ಷರು ಮತ್ತು ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ನಿವಾಸದ ಸಂಪರ್ಕ ಅಧಿಕಾರಿಯವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಕಳೆದ ಒಂದು ತಿಂಗಳಿನಿಂದ ಮುಷ್ಕರ, ಜಾಥಾ, ಪ್ರತಿಭಟನೆ, ತರಗತಿ ಬಹಿಷ್ಕರಿಸಿ ಸರ್ಕಾರವನ್ನು ಹಲವು ಬಾರಿ ಒತ್ತಾಯಿಸಿದ್ದರೂ ಸ್ಪಂದಿಸದೆ ಇರುವ ಕಾರಣ ದ.ಕ. ಜಿಲ್ಲೆಯ ಅತಿಥಿ ಉಪನ್ಯಾಸಕರ ವತಿಯಿಂದ ಕೊನೆ ಪ್ರಯತ್ನವೆಂಬಂತೆ ದೇವರಿಗೆ ಮೊರೆಯಿಡಲಾಯಿತು.




Ads on article

Advertise in articles 1

advertising articles 2

Advertise under the article