'ಹಿಂದುಗಳೇ ಮಸೀದಿ ಒಡೆಯಿರಿ" ಪ್ರಚೋದನಕಾರಿ ಹೇಳಿಕೆ: ಕಾಳಿ ಮಠದ ಋಷಿಕುಮಾರಸ್ವಾಮಿ ಅರೆಸ್ಟ್(Rishikumara swami arrest)

'ಹಿಂದುಗಳೇ ಮಸೀದಿ ಒಡೆಯಿರಿ" ಪ್ರಚೋದನಕಾರಿ ಹೇಳಿಕೆ: ಕಾಳಿ ಮಠದ ಋಷಿಕುಮಾರಸ್ವಾಮಿ ಅರೆಸ್ಟ್(Rishikumara swami arrest)

ಮಂಡ್ಯ :ಹಿಂದುಗಳೇ ಮಸೀದಿ ಒಡೆಯಿರಿ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ ಕಾಳಿಮಠದ ಋಷಿಕುಮಾರಸ್ವಾಮಿಯನ್ನು ಚಿಕ್ಕಮಗಳೂರಿನ, ಕಡೂರು ದೇವನೂರಿನ ಕಾಳಿ ಮಠದಲ್ಲಿ ಮಂಡ್ಯದ ಶ್ರೀರಂಗಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಋಷಿಕುಮಾರ ಸ್ವಾಮೀಜಿ ಹಿಂದುಗಳೇ ಮಸೀದಿ ಒಡೆಯಿರಿ ಎನ್ನುವ ಪ್ರಚೋದನಕಾರಿ ಹೇಳಿಕೆ ನೀಡಿದ್ದು ಮಾತ್ರವಲ್ಲದೆ ಆ ಹೇಳಿಕೆಯನ್ನು ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿ ಕೋಮುಗಲಭೆಗೆ ಪ್ರಚೋದನೆ ನೀಡಿರುವ ಆರೋಪದ ಮೇಲೆ ಬಂಧಿಸಲಾಗಿದೆ. 

ಋಷಿಕುಮಾರ ಸ್ವಾಮಿ ಶ್ರೀರಂಗಪಟ್ಟಣದ ಮಸೀದಿ ಮುಂದೆ ವಿಡಿಯೋ ಮಾಡಿ ಬಾಬರಿ ಮಸೀದಿ ಒಡೆದ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಒಡೆಯಬೇಕು ಈ ಮಸೀದಿಯಲ್ಲಿ ಅದ್ಬುತವಾದ ಶಿಲೆಗಳಿದ್ದು ಇದು ದೇವಸ್ಥಾನಕ್ಕೆ ಸಂಬಂಧಿಸಿದ ಕಟ್ಟಡವಾಗಿದೆ. ಶ್ರೀರಂಗಪಟ್ಟಣದ ದೇವಸ್ಥಾನವನ್ನು ಮುಸ್ಲಿಂ ಸಮುದಾಯ ಮಸೀದಿ ಮಾಡಿಕೊಂಡಿದ್ದಾರೆ.ಹಿಂದೂಗಳು ಜಾಗರೂಕರಾಗಿ, ಅತಿಬೇಗ ಒಡೆಯಬೇಕಾದ ಮಸೀದಿ ಇದು ಎಂದು ವಿವಾದಾತ್ಮಕ ಹೇಳಿಕೆ ನೀಡಿ ಪೋಸ್ಟ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.



Ads on article

Advertise in articles 1

advertising articles 2

Advertise under the article