ಮಂಗಳೂರು: 'ಸಲಿಂಗ ಕಾಮ'ಕ್ಕೆ ಕರೆದೊಯ್ದು ಹಣ ಕೊಡಲು ನಿರಾಕರಿಸಿದ ವೃದ್ಧನ ಕೊಂದ ಯುವಕ

ಮಂಗಳೂರು: 'ಸಲಿಂಗ ಕಾಮ'ಕ್ಕೆ ಕರೆದೊಯ್ದು ಹಣ ಕೊಡಲು ನಿರಾಕರಿಸಿದ ವೃದ್ಧನ ಕೊಂದ ಯುವಕ


ಮಂಗಳೂರು: ಲೈಂಗಿಕವಾಗಿ ಬಳಸಲು ಕರೆದೊಯ್ದು ಬಳಿಕ  ಹಣ ಕೊಡಲು ನಿರಾಕರಿಸಿದ ವೃದ್ಧನನ್ನು ಯುವಕನೋರ್ವನು ಕೊಲೆಗೈದಿರುವ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಹರಿಪದವು ಎಂಬಲ್ಲಿನ ಕಿಯೋನಿಕ್ಸ್ ಗೆ ಸೇರಿದ ಪ್ರದೇಶದಲ್ಲಿ ನಡೆದಿದೆ.
ನಗರದ ಮಂದಾರಬೈಲು ಜಯಾನಂದ ಆಚಾರ್ಯ(65) ಕೊಲೆಯಾದ ವ್ಯಕ್ತಿ. ಕುಂಜತ್ ಬೈಲ್, ದೇವಿನಗರ ನಿವಾಸಿ ರಾಜೇಶ್ ಪೂಜಾರಿ(31) ಬಂಧಿತ ಆರೋಪಿ.

ಜಯಾನಂದ ಆಚಾರ್ಯ ಕೂಲಿ ಕೆಲಸ ಮಾಡುತ್ತಿದ್ದು, ದಸರಾ ಸಂದರ್ಭದಲ್ಲಿ ಹೆಣ್ಣು ವೇಷ ಹಾಕುತ್ತಿದ್ದರು. ವಿಪರೀತ ಮದ್ಯದ ಚಟ ಹೊಂದಿದ್ದರು. ರಾಜೇಶ್ ಪೂಜಾರಿ ನಗರದ ಲಾಲ್ ಬಾಗ್ ನಲ್ಲಿರುವ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ‌. ಜಯಾನಂದ ಆಚಾರ್ಯ ಬಾರ್ ಬಳಿಯಿಂದಲೇ ರಾಜೇಶ್ ಪೂಜಾರಿಯನ್ನು ಸಲಿಂಗಕಾಮದ ಉದ್ದೇಶಕ್ಕೆಂದು ಅ.7 ರಿಂದ‌ ಅ.8ರ ನಡುವೆ ಕರೆದೊಯ್ದಿದ್ದಾರೆ.
ಆದರೆ ಆ ಬಳಿಕ 300 ರೂ. ಕೊಡಲು ಸತಾಯಿಸಿದ್ದಾರೆ. ಪರಿಣಾಮ ಕೋಪಗೊಂಡ ರಾಜೇಶ್ ಪೂಜಾರಿ ದಾರವೊಂದರಿಂದ ಕತ್ತು ಬಿಗಿದು ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ‌. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕಾವೂರು ಠಾಣಾ ಪೊಲೀಸರು ತನಿಖೆ ನಡೆಸಿ ಆರೋಪಿ ರಾಜೇಶ್ ಪೂಜಾರಿಯನ್ನು ಬಂಧಿಸಿದ್ದಾರೆ.

Ads on article

Advertise in articles 1

advertising articles 2

Advertise under the article