![ಕೋಟ್ಯಾಂತರ ಮೌಲ್ಯದ ಬೆಲೆಬಾಳುವ ಅಪರೂಪದ ವನ್ಯ ಜೀವಿ ಉತ್ಪನ್ನ ತಿಮಿಂಗಿಲ ತ್ಯಾಜ್ಯ(ಅಂಬರ್ ಗ್ರೀಸ್) ಮಾರಾಟಕ್ಕೆ ಯತ್ನ;ಇಬ್ಬರನ್ನು ಬಂಧಿಸಿದ ಸಿಸಿಬಿ ಕೋಟ್ಯಾಂತರ ಮೌಲ್ಯದ ಬೆಲೆಬಾಳುವ ಅಪರೂಪದ ವನ್ಯ ಜೀವಿ ಉತ್ಪನ್ನ ತಿಮಿಂಗಿಲ ತ್ಯಾಜ್ಯ(ಅಂಬರ್ ಗ್ರೀಸ್) ಮಾರಾಟಕ್ಕೆ ಯತ್ನ;ಇಬ್ಬರನ್ನು ಬಂಧಿಸಿದ ಸಿಸಿಬಿ](https://blogger.googleusercontent.com/img/b/R29vZ2xl/AVvXsEgLHwWfBIh3gI0TseSvmK834kxhpqsVu9w9l49kn7qSn6htkX-OHa-4Opth2f2IpDa044qRujxsyMx1lQNv4Ro-z9MNJCFALBceC7K9yzVon3Nybts9RLs1hPl8t1y2UgF_hptdSnuJ1LU/s1600/1673170326226720-0.png)
ಕೋಟ್ಯಾಂತರ ಮೌಲ್ಯದ ಬೆಲೆಬಾಳುವ ಅಪರೂಪದ ವನ್ಯ ಜೀವಿ ಉತ್ಪನ್ನ ತಿಮಿಂಗಿಲ ತ್ಯಾಜ್ಯ(ಅಂಬರ್ ಗ್ರೀಸ್) ಮಾರಾಟಕ್ಕೆ ಯತ್ನ;ಇಬ್ಬರನ್ನು ಬಂಧಿಸಿದ ಸಿಸಿಬಿ
Sunday, January 8, 2023
ಮಂಗಳೂರು, : ಕೋಟ್ಯಾಂತರ ಮೌಲ್ಯದ 3.2 ಕೆಜಿ ತೂಕದ ತಿಮಿಂಗಿಲ ವಾಂತಿ (ಅಂಬರ್ ಗ್ರೀಸ್) ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ
ಬೆಳ್ತಂಗಡಿ ತಾಲೂಕು ಪಡ್ಯಾರು ನಿವಾಸಿ ನಿಮಿತ್(26),ಪುಂಜಾಲಕಟ್ಟೆ ಕುಕ್ಕಳ ನಿವಾಸಿ ಯೋಗೀಶ್ (41) ಬಂಧಿತ ಆರೋಪಿಗಳು.
ನಗರದ ಲಾಲ್ ಬಾಗ್ ಕರಾವಳಿ ಉತ್ಸವ ಮೈದಾನ ಪರಿಸರದಲ್ಲಿ ಕೋಟ್ಯಾಂತರ ಬೆಲೆಬಾಳುವ ಸಮುದ್ರ ಉತ್ಪನ್ನ ಅಂಬರ್ ಗ್ರೀಸ್ ವಶದಲ್ಲಿಟ್ಟು ಮಾರಾಟಕ್ಕೆ ಯತ್ನಿಸುತ್ತಿದ್ದಾರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ನೇತೃತ್ವದ ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 3.2 ಕೆಜಿ ತೂಕದ ಅಂಬ ಗ್ರೀಸ್ ಹಾಗೂ ಎರಡು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದಕ್ಕೆ ಸುಮಾರು 3.2 ಕೋಟಿ ರೂ. ಮೌಲ್ಯವಿರುವ ಅಂದಾಜಿದೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.