![ಮಂಜೇಶ್ವರ;ಸ್ಕೂಲ್ ಬಸ್ - ಬೈಕ್ ಢಿಕ್ಕಿಯಾಗಿ ವಿದ್ಯಾರ್ಥಿಗಳಿಬ್ಬರು ದಾರುಣ ಸಾವು ಮಂಜೇಶ್ವರ;ಸ್ಕೂಲ್ ಬಸ್ - ಬೈಕ್ ಢಿಕ್ಕಿಯಾಗಿ ವಿದ್ಯಾರ್ಥಿಗಳಿಬ್ಬರು ದಾರುಣ ಸಾವು](https://blogger.googleusercontent.com/img/b/R29vZ2xl/AVvXsEjP1Kxudpy2NhXBbKDXBAfuNLSFIXEvqTZYBxWxDWpk_65gq-eX6FUqZdGAXlSjBmMJItIKu-aftLYCuqByixlUNZufohn2nh4Z_TJqUfvldd0MQ36GrMEb7O1_9qotW5zZ4pbteJ0heLs/s1600/1673597299286104-0.png)
ಮಂಜೇಶ್ವರ;ಸ್ಕೂಲ್ ಬಸ್ - ಬೈಕ್ ಢಿಕ್ಕಿಯಾಗಿ ವಿದ್ಯಾರ್ಥಿಗಳಿಬ್ಬರು ದಾರುಣ ಸಾವು
Friday, January 13, 2023
ಕಾಸರಗೋಡು: ಮಂಜೇಶ್ವರ ಸಮೀಪದ ಮಿಯಾಪದವು ಬಿಳಿಯೂರು ಬಳಿ ಇಂದು(ಶುಕ್ರವಾರ) ಬೆಳಗ್ಗೆ ಬೈಕ್ ಹಾಗೂ ಶಾಲಾ ವಾಹನ ನಡುವೆ ಸಂಭವಿಸಿರುವ ಭೀಕರ ಅಪಘಾತದಲ್ಲಿ ಬೈಕ್ ಸವಾರ ವಿದ್ಯಾರ್ಥಿಗಳಿಬ್ಬರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಮಿಯಾಪದವು ದರ್ಬೆ ನಿವಾಸಿ ಹರೀಶ್ ಎಂಬವರ ಪುತ್ರ ಪ್ರೀತೇಶ್ ಶೆಟ್ಟಿ (21) ಹಾಗೂ ಬೆಜ್ಜಂಗಳ ಸುರೇಶ್ ಎಂಬವರ ಪುತ್ರ ಅಭಿಷೇಕ್ ಎಂ (21) ಮೃತಪಟ್ಟ ದುರ್ದೈವಿಗಳು.
ಮಿಯಾಪದವು ಬಳಿಯೂರು ಬಳಿ ವಿದ್ಯಾರ್ಥಿಗಳು ಬೈಕ್ ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ವೇಳೆ ಮುಂಭಾಗದಿಂದ ಬರುತ್ತಿದ್ದ ಸ್ಕೂಲ್ಸ್ ಬಸ್ ಗೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ ವಿದ್ಯಾರ್ಥಿಗಳಿಬ್ಬರೂ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇವರು ಮಂಗಳೂರಿನ ಪ್ರೇರಣಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ. ಸ್ಥಳಕ್ಕೆ ಮಂಜೇಶ್ವರ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.