ಮಂಗಳೂರು: ಜ್ಯುವೆಲ್ಲರಿ ಸಿಬ್ಬಂದಿ ಹಂತಕನ ಫೋಟೋ ರಿಲೀಸ್ - ಪತ್ತೆಗೆ ಸಹಕಾರ ಕೋರಿದ ಪೊಲೀಸರು

ಮಂಗಳೂರು: ಜ್ಯುವೆಲ್ಲರಿ ಸಿಬ್ಬಂದಿ ಹಂತಕನ ಫೋಟೋ ರಿಲೀಸ್ - ಪತ್ತೆಗೆ ಸಹಕಾರ ಕೋರಿದ ಪೊಲೀಸರು


ಮಂಗಳೂರು: ನಗರದ ಬಲ್ಮಠರಸ್ತೆಯಲ್ಲಿರುವ ಮಂಗಳೂರು ಜ್ಯುವೆಲ್ಲರಿಯೊಳಗಡೆ ಹಾಡಹಗಲೇ ಸಿಬ್ಬಂದಿಯ ಹತ್ಯೆಗೈದ ಹಂತಕನ ಪತ್ತೆ ಕಾರ್ಯಾಚರಣೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಶಂಕಿತ ಆರೋಪಿಯ ಸಿಸಿ ಕ್ಯಾಮರಾ ಚಿತ್ರವನ್ನು ಪೊಲೀಸರು ರಿಲೀಸ್ ಮಾಡಿದ್ದಾರೆ.

 ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಮಠ ರಸ್ತೆಯಲ್ಲಿರುವ ಮಂಗಳೂರು ಜ್ಯುವೆಲರ್ಸ್‌ಗೆ ಹಂತಕ ಫೆ.3ರಂದು ಮಧ್ಯಾಹ್ನ 3.30 ರಿಂದ 3.45 ರ ನಡುವೆ ಚಿನ್ನ ಖರೀದಿಸುವವರ ಸೋಗಿನಲ್ಲಿ ಬಂದಿದ್ದ. ಆ ಬಳಿಕ ಜ್ಯುವೆಲ್ಲರಿಯಲ್ಲಿ ಒಬ್ಬರೇ ಇದ್ದ ಸಿಬ್ಬಂದಿ ರಾಘವೇಂದ್ರ ಆಚಾರ್ ನನ್ನು ಚಾಕುವಿನಿಂದ ಇರಿದು ಕೊಲೆಗೈದು ಅಲ್ಲಿಂದ ರಿಕ್ಷಾದಲ್ಲಿ ಪರಾರಿಯಾಗಿದ್ದಾನೆ.

ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಹಂತಕನ ಭಾವಚಿತ್ರ ಪತ್ತೆಯಾಗಿದೆ. ಆರೋಪಿಯ ಬಗ್ಗೆ ಯಾವುದೇ ಮಾಹಿತಿ ಕಂಡುಬಂದಲ್ಲಿ, ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಎಸಿಪಿ ಸಿಸಿಬಿ, ಮಂಗಳೂರು ನಗರ - ಪಿ.ಎ.ಹೆಗ್ಡೆ 9945054333, ಎಸಿಪಿ ಕೇಂದ್ರ ಉಪ ವಿಭಾಗ, ಮಂಗಳೂರು ನಗರ - ಮಹೇಶ್ ಕುಮಾರ್ -9480805320 ಅವರ ಮೊಬೈಲ್ ಫೋನ್ ಗೆ ತಿಳಿಸಬಹುದು. ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article