![ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಬಂಟ್ವಾಳ ಕಾಲೇಜಿನ ಉಪನ್ಯಾಸಕಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಬಂಟ್ವಾಳ ಕಾಲೇಜಿನ ಉಪನ್ಯಾಸಕಿ](https://blogger.googleusercontent.com/img/b/R29vZ2xl/AVvXsEg6buJxQKD2553KfooGHCBIcI57yiS5A86ebZB7MBevpUd0923uYsT00ZGtIo0Z80ZC29j8bLfHO3PesDUJFXUrqPmmRJH43XnViYhDy9gp8MtfR2A3DNhopASlYZmGjyvXAXfwVKlOo5I/s1600/1675842838904531-0.png)
ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಬಂಟ್ವಾಳ ಕಾಲೇಜಿನ ಉಪನ್ಯಾಸಕಿ
Wednesday, February 8, 2023
ಮಂಗಳೂರು: ಉಪನ್ಯಾಸಕಿಯಾಗಿದ್ದ ಮಹಿಳೆ ತನ್ನ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಲ್ಕಿ ಸಮೀಪದ ಎಸ್ ಕೋಡಿ ಎಂಬಲ್ಲಿ ನಡೆದಿದೆ.
ಬಂಟ್ವಾಳದ ವಾಮದಪದವು ಕಾಲೇಜಿನಲ್ಲಿ ಉಪನ್ಯಾಸಕಿ ಆಗಿದ್ದ ಅಮಿತಾ ಬಿವಿ (34) ಮೃತ ಮಹಿಳೆ. ಮದುವೆಯಾಗಿ 12 ವರ್ಷಗಳಾಗಿದ್ದು ಎಂಟು ವರ್ಷದ ಪುತ್ರಿಯನ್ನು ಹೊಂದಿದ್ದರು. ಬಂಟ್ವಾಳದ ತಾಯಿ ಮನೆಯಿಂದ ಬಂದು ಎಸ್ ಕೋಡಿಯ ಪತಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನಿಗೆ ಸೀರೆಯಿಂದ ನೇಣು ಬಿಗಿದು ಸಾವಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮುಲ್ಕಿ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಬಂಟ್ವಾಳ ಮೂಲದ ರಾಯಿ ನಿವಾಸಿ ಬಿ.ಎಸ್.ಎನ್.ಎಲ್ ಉದ್ಯೋಗಿ ವೀರಪ್ಪ ಎಂಬವರ ಪುತ್ರಿಯಾಗಿದ್ದ ಅಮಿತಾ ಕ್ರಿಯಾಶೀಲ ಮಹಿಳೆಯಾಗಿದ್ದರು. ವಾಮದಪದವು ಕಾಲೇಜಿನಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು ತಾಯಿ ಮನೆಯಿಂದಲೇ ಹೋಗಿ ಬರುತ್ತಿದ್ದರು. ಸೋಮವಾರ ಕಾಲೇಜಿಗೆ ಆಗಮಿಸಿದ್ದ ಅಮಿತಾ ಸಂಜೆ ವೇಳೆ ಗಂಡನ ಮನೆಗೆ ತೆರಳಿದ್ದರು. ಮಂಗಳವಾರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.