ಆಂಧ್ರ ಪ್ರದೇಶ :ಯುವತಿಯನ್ನು ಮನೆಗೆ ಕರೆದು ತುಂಡು ತುಂಡಾಗಿ ಕತ್ತರಿಸಿದ; ಸಾಕ್ಷಿ ನಾಶಕ್ಕೆ ಫ್ರಿಡ್ಜ್​ನಲ್ಲಿ ದೇಹ ತುಂಬಿಟ್ಟ ನೌಕಾಪಡೆಯ ತಂತ್ರಜ್ಞ...!!!

ಆಂಧ್ರ ಪ್ರದೇಶ :ಯುವತಿಯನ್ನು ಮನೆಗೆ ಕರೆದು ತುಂಡು ತುಂಡಾಗಿ ಕತ್ತರಿಸಿದ; ಸಾಕ್ಷಿ ನಾಶಕ್ಕೆ ಫ್ರಿಡ್ಜ್​ನಲ್ಲಿ ದೇಹ ತುಂಬಿಟ್ಟ ನೌಕಾಪಡೆಯ ತಂತ್ರಜ್ಞ...!!!

VISAKHAPATNAM MURDER

ಆಂಧ್ರ ಪ್ರದೇಶ: ಇಲ್ಲಿನ ಜನರನ್ನು ಬೆಚ್ಚಿಬೀಳಿಸುವ ಆತಂಕಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ನೌಕಾಪಡೆಯ ತಂತ್ರಜ್ಞನೋರ್ವ ಯುವತಿಯನ್ನು ಭೀಕರವಾಗಿ ಕೊಲೆ ಮಾಡಿ, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಸಾಕ್ಷಿ ನಾಶಕ್ಕೆ ಯತ್ನಿಸಿರುವ ಆರೋಪ ಕೇಳಿಬಂದಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಆರೋಪಿ, ವಿಜಯನಗರಂ ಜಿಲ್ಲೆಯ ರಾಜಮ್ ಮೂಲದ 35 ವರ್ಷದ ಚಿಂತಾಡ ರವೀಂದ್ರ, ವಿಶಾಖಪಟ್ಟಣದ ಎಲ್.ವಿ. ನಗರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ. ಆತನ ಪತ್ನಿ ಒಂದು ತಿಂಗಳ ಹಿಂದೆ ಹೆರಿಗೆಗಾಗಿ ತನ್ನ ತವರು ಮನೆಗೆ ಹೋಗಿದ್ದರು. ಈ ವೇಳೆ ರವೀಂದ್ರ ತನಗೆ ಪರಿಚಯವಿರುವ ವಿಶಾಖಪಟ್ಟಣಂನ 29 ವರ್ಷದ ಮೌನಿಕಾಳನ್ನು ಭಾನುವಾರ ಮಧ್ಯಾಹ್ನ ತನ್ನ ಫ್ಲಾಟ್‌ಗೆ ಕರೆದಿದ್ದ.

ಲಾಕ್​ಡೌನ್​ನಿಂದಲೂ ಇಬ್ಬರೂ ಪರಿಚಿತರು: ಲಾಕ್‌ಡೌನ್ ಅವಧಿಯಿಂದಲೂ ರವೀಂದ್ರ ಮತ್ತು ಮೌನಿಕಾ ಪರಿಚಿತರಾಗಿದ್ದರು ಮತ್ತು ಡೇಟಿಂಗ್ ಆ್ಯಪ್ ಮೂಲಕ ಭೇಟಿಯಾಗಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಮೌನಿಕಾ ಕೀರ್ತಿ ಅಪಾರ್ಟ್‌ಮೆಂಟ್‌ಗೆ ಬಂದ ಕೂಡಲೇ ಅವರ ನಡುವೆ ಜಗಳ ಶುರುವಾಗಿತ್ತು. ಆಗ ಕೋಪದಲ್ಲಿ ರವೀಂದ್ರ ಆಕೆಯನ್ನು ಕ್ರೂರವಾಗಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿಯು ಅಪರಾಧವನ್ನು ಮೊದಲೇ ಯೋಜಿಸಿದ್ದನು, ಮುಂಚಿತವಾಗಿ ಚಾಕುಗಳನ್ನು ಖರೀದಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯ ನಂತರ, ಆತ ದೇಹವನ್ನು ಹಲವು ಭಾಗಗಳಾಗಿ ವಿಂಗಡಿಸಿದ್ದಾನೆ. ದೇಹದ ಕೆಲವು ಭಾಗಗಳನ್ನು ರೆಫ್ರಿಜರೇಟರ್ ಒಳಗೆ ಸಂಗ್ರಹಿಸಿಟ್ಟಿದ್ದ ಆತ, ಕೆಲವು ಭಾಗಗಳನ್ನು ಗೋಣಿ ಚೀಲಗಳಲ್ಲಿ ತುಂಬಿಸಿಟ್ಟಿದ್ದ. ಸಾಕ್ಷ್ಯಗಳನ್ನು ನಾಶಪಡಿಸುವ ನಿಟ್ಟಿನಲ್ಲಿ, ಕತ್ತರಿಸಿದ ತಲೆಯನ್ನು ದರಪಾಲಂನಲ್ಲಿ ವಿಲೇವಾರಿ ಮಾಡಿ, ಯುವತಿಯ ಮೊಬೈಲ್ ಫೋನ್ ಜೊತೆಗೆ ಹತ್ತಿರದ ತೋಟಗಳಲ್ಲಿ ಸುಟ್ಟುಹಾಕಿದ್ದಾನೆ ಎಂದು ವರದಿಯಾಗಿದೆ.

ಸಾಕ್ಷಿ ನಾಶಕ್ಕೆ ಯತ್ನ, ಬಳಿಕ ಪೊಲೀಸರಿಗೆ ಶರಣು: ಆರೋಪಿ ರವೀಂದ್ರ ಕೃತ್ಯವೆಸಗಿದ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ರಕ್ತದ ಕಲೆಗಳನ್ನು ತೊಳೆದು ಅಲ್ಲಿ ವಾಸನೆಯನ್ನು ಮರೆಮಾಚಲು ಸುಗಂಧ ದ್ರವ್ಯವನ್ನು ಸಿಂಪಡಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಅವನು ಸ್ನೇಹಿತನನ್ನು ಸಂಪರ್ಕಿಸಿ, ತಾನು ಮಾಡಿರುವ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಮತ್ತು ಸ್ನೇಹಿತನ ಸಲಹೆಯ ಮೇರೆಗೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ವಿಚಾರಣೆಯ ಸಂದರ್ಭದಲ್ಲಿ, ಮೌನಿಕಾ ಹಣಕ್ಕಾಗಿ ಪದೇ ಪದೇ ತನಗೆ ಕಿರುಕುಳ ನೀಡುತ್ತಿದ್ದಳು ಎಂದು ರವೀಂದ್ರ ಹೇಳಿಕೊಂಡಿದ್ದಾನೆ. ತಾನು ಈಗಾಗಲೇ ಅವಳಿಗೆ ಸುಮಾರು ₹3.5 ಲಕ್ಷ ನೀಡಿದ್ದೇನೆ ಮತ್ತು ಹೆಚ್ಚಿನ ಹಣಕ್ಕಾಗಿ ಬೆದರಿಕೆ ಹಾಕಲು ಅವಳು ತನ್ನ ಕಂಪನಿಯ ಐಡಿ ಕಾರ್ಡ್​ಅನ್ನು ಸಹ ತೆಗೆದುಕೊಂಡಿದ್ದಳು ಎಂದು ಆರೋಪಿಸಿದ್ದಾನೆ. ಪೊಲೀಸರು ತನಿಖೆಯ ಭಾಗವಾಗಿ ಎಲ್ಲಾ ಆಯಾಮಗಳಲ್ಲಿ ಪರಿಶೀಲಿಸುತ್ತಿದ್ದಾರೆ.

ಗಜುವಾಕ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉಳಿದ ಸಾಕ್ಷಿಗಳನ್ನು ಪತ್ತೆಹಚ್ಚಲು ದರಪಾಲಂ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ಮುಂದುವರಿಸಿದ್ದಾರೆ. ಒಟ್ಟಾರೆ ಈ ಅಪರಾಧ ಕೃತ್ಯವು ನಗರದ ಜನರಲ್ಲಿ ಭಯ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ

Ads on article

Advertise in articles 1

advertising articles 2

Advertise under the article